#bhajan #folk #song #kannadafolksongs #ಅಯ್ಯಪ್ಪ , ಹೊಸಳ್ಳಿ , ಯಾದಗಿರಿ ಅವರು ಈ ಪದ ಹಾಡಿರುವರು ನಮ್ಮ ಎಲ್ಲಾ ಕೇಳುಗರ ಪರವಾಗಿ ಅವರಿಗೆ ಅಭಿನಂದನೆಗಳು ಸಲ್ಲುವವು
#ಭಜನಾಪದಗಳು #bhajanapada #ಅಯ್ಯಪ್ಪಣ್ಣಹೊಸಳ್ಳಿ #ayyappahosalli
#tatvapadagalu
#kannada
#ಶ್ರೀ ಗುರು ಸುಕ್ಷೇತ್ರಕ್ಕಿಂದು
ಹೋಗಿ ಯಾತ್ರೆಯ ಮಾಡಿ ಬಂದೆ
ಶ್ರೀ ಗುರು ನಮ್ಮ ಶರೀರ ದೋಳುಂಟು
| ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ ಮರ್ಮ ಬೇರುಂಟು |
ಆರು ಬೆಟ್ಟಗಳೇರಿ ನಡೆದೆ
ಮೂರು ಕೊಳ್ಳುವ ಮೂಲಕ್ಕಿಳಿದೆ
ಏರಿ ನೋಡು ಕೈಲಾಸದ್ವಾರಗಳು
|ಓಂ ಶ್ರೀ ಗುರು ಸಿದ್ದ ಸಾರಬಡಗಲ ಗುಡಿಯ ಕಂಡೆನಾ|
ಏಳಸುತ್ತಿನ ಕೋಟೆಯೊಳಗೆ
ಮೇಲುಗುಪ್ಪರ ಗಿರಿಗಳ ನಡುವೆ
ತಾಳ ಮದ್ದಲೆ ಗಂಟೆಗಳುಮೊಳಗಿ
|ಓಂಶ್ರೀ ಗುರು ಸಿದ್ದ ವೇಳೆ ವೇಳೆಗೆ ತಾವೇ ನುಡಿದಾವೋ|
ಒಂಬತ್ತು ಬಾಗಿಲದೋಳು
ಇಂಬಲಾದವು ಬೀದಿ ನಾಲ್ಕು
ತುಂಬಿ ಸೋಸುವ ಕೊಳ್ಳಗಳೆಂಟು
|ಓಂ ಶ್ರೀ ಗುರು ಸಿದ್ದ ಕಂಭವೆರಡು ಶಿಖರವೊಂದುಂಟು|
ಪಾತಳ ಗಂಗೆಯೊಳು ಮಿಂದು
ಹೋತ ಶಿಖರೇಶ್ವರನಿಗೇರಿ
ಜೋತಿರ್ಲಿಂಗಕ ದೃಷ್ಟಿ ಹೂಡಿದೆನು
|ಓಂ ಶ್ರೀ ಗುರು ಸಿದ್ದ ಜೋತಿರ್ಲಿಂಗವು ಕರದೊಳು ಕಾಣಿಸಿತು.|
ಬರುವ ಕೋಣಗಳೆಂಟು ಬಡದೆ
ಇರಿಯ ಹುಲಿಗಳನಾರು ತಡದೆ
ಮೆರೆವ ಸರ್ಪಗಳೆಡೆಯ ಮೆಟ್ಟಿದೆನು
|ಓಂ ಶ್ರೀ ಗುರು ಸಿದ್ದ ಸರ್ಪಕಪಿಯನು ಇಡಿದು ಕಟ್ಟಿದೆನು|
ಇಂದ್ರ ದಿಕ್ಕಿನೊಳಿರುವ ಸೂರ್ಯ
ಚಂದ್ರದಿಕ್ಕಿನ ಪುರದೊಳು ಮುಳಗಿ
ಅಂದ ಚಂದದ ಬೆಳಕ ತೋರಿದನು
|ಓಂ ಶ್ರೀ ಗುರು ಸಿದ್ದ ಹಿಂದ ನೋಡಲು ಬಯಲಿಗೆ ಬಯಲಂದ |
ಸಪ್ತ ಸಾಗರ ನದಿಯ ದಾಟಿ
ಗುಪ್ತ ಕದದೊಳು ಬನದಲಿ ಸುಳಿದು
ನಿತ್ಯ ಗುಡಿಯೊಳು ಗೋಪುರ ಹೊಕ್ಕೇನು
|ಓಂ ಶ್ರೀ ಗುರು ಸಿದ್ದ ಸಪ್ತ ವರ್ಣದ ಲಿಂಗ ಕಂಡೆನು|
ಇರಿಯ ಶಿಖರದ ಅಗ್ನಿ ಮುಖದೊಳು
ಅರಿತು ಅಡಕೇಶ್ವರನ ಕೇಳಿ
ಜೋತಿರ್ಲಿಂಗಕ್ಕೆ ದೃಷ್ಟಿ ಗೊಂಡೇನು
| ಓಂ ಶ್ರೀ ಗುರು ಸಿದ್ದ ಅರ್ಥ ಸೇವಿಸಿ ಮರಣವಿಲ್ಲೆಂದ|
ಇಂಥ ಶ್ರೀ ಶೈಲ ಗನವದೊಳಗ
ಬ್ರಾಂತಿಗೆಟ್ಟು ತಿರುಗಿ ನೋಡಲು
ಅಂತರಂಗದ ಗುಡಿಯ ಕಂಡೇನು
|ಓಂ ಶ್ರೀ ಗುರು ಸಿದ್ದ ಶಾಂತಮಲ್ಲಯ ತಾನೇ ಆಗಿದನು|