*ಹುತ್ತರಿ ಹಾಡು-ಪಂಜೆ ಮಂಗೇಶರಾಯ
*ಕವಿ-ಪಂಜೆ ಮಂಗೇಶರಾಯ
*ಜನನ:22 ಫೆಬ್ರುವರಿ 1874
*ಸ್ಥಳ:ಬಂಟ್ವಾಳ (ದ.ಕ)
*ತಂದೆ:ರಾಮಪ್ಪಯ್ಯ *ತಾಯಿ*:ಶಾಂತಾದುರ್ಗಾ
*ಕಾವ್ಯನಾಮ: ಕವಿಶಿಷ್ಯ
*ಬಿರುದು:ಮಕ್ಕಳ ಸಾಹಿತ್ಯದ ಪಿತಾಮಹಾ
*ಕೃತಿಗಳು:ಪಂಚಕಜ್ಜಾಯ, ಐತಿಹಾಸಿಕ ಕಥಾವಳಿ,ಕೋಟಿ ಚೆನ್ನಯ್ಯ, ನಾಗರ ಹಾವೆ ಹಾವೊಳು ಹೂವೆ, ತೆಂಕಣಗಾಳಿಯಾಟ ಇತ್ಯಾದಿ.
*1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
*ನಿಧನ: 24 ಅಕ್ಟೋಬರ್ 1937
*ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿಹಾಡು ಒಂದು. ಕೊಡವರ ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ , ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನಲೆಯನ್ನು ಇದು ಒಳಗೊಂಡಿದೆ.