ಏಕೆ ಮಲಗಿರುವೆ ರಂಗನಾಥ
ರಾಗ: ಕಾಂಭೋದಿ ಖಂಡ ಛಾಪುತಾಳ
ರಚನೆ: ಎಸ್. ಎಲ್. ಮೂರ್ತಿ
ಏಕೆ ಮಲಗಿರುವೆ ರಂಗನಾಥ
ಅವತಾರಗಳನ್ನೆತ್ತಿ ಆಯಾಸವಾಗಿಹುದೆ
ಮೀನಾಗಿಈಜಾಡಿಮೈಭಾರವೆನಿಸಿದೆಯೇ
ಬೆಟ್ಟವಮೇಲೆತ್ತೆ ಬೆನ್ನುನೋವೆ
ಧರಣಿಭಾರವನ್ನೆತ್ತಿಕೊರೆನೋಯುತಲಿದೆಯೇ
ದುರುಳನ ಕರುಳ್ಬಗೆದ ಬೆರಳನೋವೆ
ಬಲಿಯನೊತ್ತಿದ ಪಾದ ಬಲುನೋಯುತಲು ಇದೆಯೇ
ಪರಶುವ ಹಿಡಿದ ಆ ಕೈ ನೋವೇ
ಕಾಡೆಲ್ಲಾ ತಿರುತಿರುಗಿ ಕಾಲು ನೋಯುತಲಿದೆಯೇ
ಬಹುವಾಗಿ ಬೆಣ್ಣೆ ಮೆದ್ದು ಹೊಟ್ಟೆ ನೋವೇ
ನೇಗಿಲನು ನೀನೆತ್ತಿ ಯುಗಗಳೇ ಆದವೋ
ನಗುನಗುತ ಮೇಲೇಳೋ ನಾರಸಿಂಹ
ಭರದಿ ನೀಮೆಲೆದ್ದುತುರಂಗವೇರುವೆಯೇಳು
ಭಕ್ತಪೋಷಣೆಗಿದುವೇ ಸಮಯವಯ್ಯಾ